(JavaScript required to view this email address)
Mangalore

News & Articles

ಮಂಗಳೂರು : ಕಥಾಬಿಂದು ಪ್ರಕಾಶನದ ಪಿ ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಂಸ್ಥೆಯ 18ನೇ ವಾರ್ಷಿಕ ಸಂಭ್ರಮಾ ಚರಣೆಯ ನಿಮಿತ್ತವಾಗಿ 'ಸಾಹಿತ್ಯೋತ್ಸವ" ಕಾರ್ಯಕ್ರಮ ಅದ್ದೂರಿಯಾಗಿ ನಡೆ ಯಿತು. ಮಂಗಳೂರಿನ ಹೊರವಲಯದ ದೇರಳಕಟ್ಟೆ ವಿದ್ಯಾ ರತ್ನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ದಿನಪೂರ್ತಿ ಕಾರ್ಯಕ್ರಮ ನಡೆದು ಸಂಪನ್ನವಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ವಿದ್ಯಾರತ್ನ ಸಂಸ್ಥೆಯ ಸ್ಥಾಪಕರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು, ಯುಗಪುರುಷ ಮಾಸಿಕದ ಸಂಪಾದಕರಾದ ಶ್ರೀ ಭುವನಾಭಿ ರಾಮ ಉಡುಪ, ಸಿನಿಮಾ ನಟ ಮತ್ತು ನಿರ್ಮಾಪಕರಾದ ಸತೀಶ್ ಎನ್ ಬಂಗೇರ, ಡಾ ದೇವಪ್ಪ ಇವರು ಅತಿಥಿಗಳಾಗಿ ಭಾಗವಹಿಸಿದರು. ಪೂರ್ವಾಹ್ನ 10 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ಅನಿತಾ ಶೆಣೈ, ಸುಲೋಚನಾ ನವೀನ್, ಸುಭಾಷಿ ಣಿ ಮತ್ತು ರೇಖಾ ಸುದೇಶ್ ಅವರ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಕಾದಂಬರಿಗಾರರಾದ ಪಿ ವಿ ಪ್ರದೀಪ್ ಕುಮಾರ್ ಅವರು ಪ್ರಸ್ತಾವನೆ ಮಾಡಿದರು. ಈ ಸಂದರ್ಭದಲ್ಲಿ 17 ಪುಸ್ತಕಗಳು ಲೋಕಾರ್ಪಣೆಗೊಂಡುವು. ದೇವನೂರು ಅಚ್ಯುತ ರಾವ್ ಅವರ  'ನಲ್ಲಿ ಮುಡಿದ ಮಲ್ಲೆ' ನೀಮಾ ಲೋಬೋ ಅವರ 'ಅಭಿಸಾರಿಕೆ' ಮತ್ತು ಮಾತು ಮುಗಿದ ಮೇಲೂ, ರವೀಶ ಕೆ. ಮಳಲಿ ಚೆನ್ನೇನ ಹಳ್ಳಿ ಅವರ 'ಅವನೂ ಸುಳ್‌ ಹೇಳ್ತಾಳ'  ಚಿಲಿಪಿಲಿ, ಡಾ. ಜಾನಕಿ ದೇವಿ ಅವರ 'ಗುರುದೇವ', ರೇವತಿ ಆರ್ ವೈದ್ಯ ಅವರ 'ಕವನ ಕಿರಣಗಳು' ಪುಷ್ಪ ಪ್ರಸಾದ್ ಅವರ 'ಗುಡಿಗಾರ'. ಅನುಪಮ ಸುಲಾಖೆ ಅವರ ಚಿಲಿಪಿಲಿ, ಕುವಿಕು ಕಣ್ವತಿರ್ಥ ಅವರ ಬೋಟಿ ಶಶಿಕಲಾ ಟೀಚರ್ ಅವರ 'ಕವನದ ಹಾದಿ', ಶೋಭಾ ದಿನೇಶ್ ಉದ್ಯಾವರ ಅವರ ಬೆರಗು ಚುಕ್ಕಿ, ಗೀತಾ ಲೋಕೇಶ್ ಅವರ ಭಾವ ಸಿಂಚನ, ಡಾ. ಶಶಿಕಿರಣ್ ಶೆಟ್ಟಿ ಅವರ ಬದುಕ ಬದಲಿಸುವ ಕತೆಗಳು.., ಕವಿತಾ ಗೋಪಾಲ್ ಅವರ ಕತ್ತಲೆಯ ಕಣ್ಣು, ಅನಿತಾ ಶೆಣೈ ಅವರ ಮಿಂಚುಳ್ಳಿ,  ವಿಜಯ ಗೌರಿಸುತ ಅವರ 'ಕವನ ಧಾರೆ' ಶಿಕ್ಷಕರಾದ ವಿದ್ವಾಂಸ ಶ್ರೀ ವಿ ಬಿ ಕುಳಮರ್ವ ಕೃತಿ ಬಿಡುಗಡೆ ಮಾಡಿ ಕೃತಿಕಾರರಿಗೆ ಶುಭ ಹಾರೈಸಿದರು.

ಕಥಾಬಿಂದು ಸಾಹಿತ್ಯೋತ್ಸವ
ಪಿ. ವಿ. ಪ್ರದೀಪ್ ಕುಮಾರ್ ಅವರ  ಸಮಗ್ರ ಸಾಹಿತ್ಯ ಸಂಪುಟ ಒಂದು ಕಣಜ ಕೃತಿ ಬಿಡುಗಡೆಗೊಂಡಿತು
ಕಥಾಬಿಂದು ಸಾಹಿತ್ಯೋತ್ಸವ
ಕಥಾಬಿಂದು ಸಾಹಿತ್ಯೋತ್ಸವದ .. ವಾರ್ಷಿಕ ಸಂಚಿಕೆ ಬಿಡುಗಡೆಗೊಂಡಿತು
ಕಥಾಬಿಂದು ಸಾಹಿತ್ಯೋತ್ಸವ
ಈ ವೇದಿಕೆಯಲ್ಲಿ ಚೈತನ್ಯಶ್ರೀ ರಾಜ್ಯ ಪ್ರಶಸ್ತಿಯನ್ನು ಡಾ ಬಿ ಎ ಪಾಲಾಕ್ಷ ಅವರು ಪಡೆದರು. ಕಥಾ ಬಿಂದು ಪ್ರಕಾಶನದಲ್ಲಿ ಪ್ರಕಟವಾದ "ಬಾಲ ಮಂದಾರ" ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಕೊಡ ಮಾಡುವ " ಸೊಗಸು" (2023)  ಪ್ರಶಸ್ತಿಗೆ ಭಾಜನರಾದ ಪರ್ವೀನಾ ಬಾನು ಎನ್ ಶೇಖ ಅವರನ್ನು ಸನ್ಮಾನಿಸಲಾಯಿತು.

ಕಥಾಬಿಂದು ಸಾಹಿತ್ಯೋತ್ಸವ
ಸಾಧಕರಾದ ಶ್ರೀ ಸತೀಶ್ ಶೆಟ್ಟಿ (ಸಮಾಜ ಸೇವ ರತ್ನ), ಶ್ರೀ ಆರ್ ಎಂ ಗೋಗೇರಿ (ಸೌರಭರತ್ನ), ಡಾ ಲಕ್ಷ್ಮಿ ಕಾಂತ ಕೆ ಎಸ್ (ಶಿಕ್ಷಣ ರತ್ನ), ಕುಮಾರ್‌ ಆ‌ರ್ ಶೆಟ್ಟಿ (ಸೌರಭರತ್ನ), ಶ್ರೀ ನಾಗರಾಜ ಭಟ್ (ಸೌರಭರತ್ನ), ಡಾ ಶಶಿಕಿರಣ್ ಶೆಟ್ಟಿ (ಸಮಾಜ ಸೇವಾ ರತ್ನ), ಶ್ರೀಮತಿ ಕವಿತಾ ಗೋಪಾಲ್ (ಸಮಾಜ ಸೇವ ರತ್ನ), ಶ್ರೀಮತಿ ಶೈಲಾ ಚೆಲುವಯ್ಯ (ಸೌರಭರತ್ನ), ಶ್ರೀಮತಿ ಅಣ್ಣಮ್ಮ (ಸೌರಭರತ್ನ), ಪೂರ್ಣಿಮಾ ಗುರುಮೂರ್ತಿ (ಸೌರಭರತ್ನ), ಶೈಲಾ ಬಸವರಾಜ್ (ಶಿಕ್ಷಣ ರತ್ನ), ಕೇಶವ ಶಕ್ತಿನಗರ (ಯಕ್ಷಗಾನ ಶ್ರೀ) ಮತ್ತು ಎ ವಿಜಯಕುಮಾರ್ (ಗಾಯನ ಶ್ರೀ) ರಾಜ್ಯ ಪ್ರಶಸ್ತಿ ಸ್ವೀಕರಿಸಿದರು.  ಇದೇ ಸಂದರ್ಭದಲ್ಲಿ 32 ಹಿರಿಯ ! ಶಿಕ್ಷಕ-ಶಿಕ್ಷಕಿಯರಿಗೆ " ಶಿಕ್ಷಕ ರತ್ನ" ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ! ತದನಂತರ ಶ್ರೀಮತಿ ಪುಷ್ಪ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ! ಕವಿಗೋಷ್ಠಿಯಲ್ಲಿ ಸುಮಾರು 20 ಕವಿಗಳು ಕವನ ವಾಚಿಸಿದರು.
ಕಾರ್ಯಕ್ರಮವನ್ನು ಲೇಖಕಿ ಲಕ್ಷ್ಮೀ ವಿ ಭಟ್, ಆಕಾಶವಾಣಿ ಉದ್ವೇಷಕಿ ಸುಲೋಚನಾ ನವೀನ್ ಕವಯತ್ರಿ ವಿದ್ಯಾ ಅಡೂರ್,ಕವಯತ್ರಿ ವಿಂದ್ಯಾ ಎಸ್ ರೈ ಕಾರ್ಯಕ್ರಮ ನಿರ್ವಹಿಸಿದರು.

ಕಥಾಬಿಂದು ಸಾಹಿತ್ಯೋತ್ಸವ
ಕಾರ್ಯಕ್ರಮದ ಭಾಗವಾಗಿ ವಿಧುಷಿ ಲಕ್ಷ್ಮಿ ತೆರೆದಮಠ ಅವರ ನೇತೃತ್ವದಲ್ಲಿ ನಾಟ್ಯಕಲಾ ಅಕಾಡಮಿ, ವಿಜಯಪುರ ಆಶಯದಲ್ಲಿ ಸಾಂಸ್ಕೃತಿ ಕ ಕಾರ್ಯಕ್ರಮ ಜರಗಿತು. ಕಾಸರ ಗೋಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಡಾ ವಾಣಿಶ್ರೀ ಅವರ ನೇತೃತ್ವದಲ್ಲಿ ಸಾಹಿತ್ಯ ಗಾನ ನೃತ್ಯ । ವೈಭವ ಮತ್ತು ಗಡಿನಾಡ ಜಾನಪದ ಮಹಿಳಾ ತಂಡ ಇವರಿಂದ ಕನ್ನಡಿಗ । ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಥಾಬಿಂದು ಸಾಹಿತ್ಯೋತ್ಸವ
 ಡಾ. ಶಶಿಕಿರಣ್ ಶೆಟ್ಟಿ ಅವರ ಬದುಕ ಬದಲಿಸುವ ಕತೆಗಳು.., 
ಕಥಾಬಿಂದು ಸಾಹಿತ್ಯೋತ್ಸವ
 ಡಾ ಶಶಿಕಿರಣ್ ಶೆಟ್ಟಿ (ಸಮಾಜ ಸೇವಾ ರತ್ನ),

Comments (2)




ಶಮ

ಶಾರದಾ ಮೊಳೆಯಾರ್ commented on October 28th, 2025 at 5:39 PM 
Shubhvagali



SM

Sharada Moleyar commented on October 28th, 2025 at 5:54 PM 
ಶುಭವಾಗಲಿ