ಸಾಹಿತ್ಯವು ಹಿತವನ್ನು ಜೊತೆಯಲ್ಲಿ ಹೊತ್ತುತರುತ್ತದೆ. ಪದ್ಯಗಳನ್ನು ಅನೇಕ ಕವಿಮಾನ್ಯರು ಕನ್ನಡ ಸಾಹಿತ್ಯಕ್ಕೆ, ನಾಡಿಗೆ ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ. ಈ ಸಾಲಿಗೆ ಜಯಂತಿ ಕನ್ನುಕೆರೆ ಅವರು ಸೇರುತ್ತಾರೆ. ಮನಸ್ಸಿಗೆ ಮುದ ನೀಡುವ ಹೃದ್ಯವಾದ ಕವನಗಳನ್ನು ಜಯಂತಿ ಕನ್ನುಕೆರೆ ಬರೆಯುವುದರಲ್ಲಿ ಪಳಗಿದ್ದಾರೆ. ಕಥೆ, ಕವನ, ಕಾದಂಬರಿ, ಲೇಖನ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಜಯಂತಿ ಕನ್ನುಕೆರೆ ಅವರು ಗೃಹಿಣಿಯಾಗಿ, ತಾಯಿಯಾಗಿ ಗೃಹ ಕೃತ್ಯವನ್ನು ನಿಭಾಯಿಸುತ್ತಾ, ಸಾಹಿತ್ಯಾಭಿಮಾನಿಯಾಗಿ ಇವರದು ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ. ಮನೆಗೆ ಮಲ್ಲಿಗೆಯಾಗಿ, ಕಷ್ಟಗಳಿಗೆ ಕಲ್ಲಾಗಿ ಎಲ್ಲರಲ್ಲೂ ಸಹೃದಯತೆಯನ್ನು ಹೊಂದಿ ಜೀವನಾನುಭವಗಳನ್ನು ತಮ್ಮ ಕವನಗಳಲ್ಲಿ ಅಚ್ಚೊತ್ತಿದ್ದಾರೆ. ಛಂದೋಬದ್ಧವಾಗಿ, ಲಯಭರಿತ ಪದಲಾಲಿತ್ಯದಿಂದ ಅವರ ಕವನ ಆಕರ್ಷಿಸುತ್ತದೆ.
ಒಸಗೆ
ಸೌಹಾರ್ದದ ಬಾಳಿಗೆ ಒಲವಿನ ಬೆಸುಗೆ,
ಸೌಜನ್ಯ ತುಂಬಿದ ಉಲ್ಲಾಸದ ಒಸಗೆ,
ಸೌಗಂಧಿಕಾ ಪುಷ್ಪದ ಘಮವದು ಬುವಿಗೆ,
ಸೌರಭ ಸೂಸುವ ಸೃಷ್ಟಿಯ ಬೆಡಗೆ.
ಒಸಗೆ., ಭಾವಯಾನ., ಜಲಕ್ರಾಂತಿ., ವಿಕಸನ., ವಿಶ್ವಗುರು., ಜ್ಞಾನ ದೀವಿಗೆ., ಅನುಭಾವ., ಲೋಕ ಪೂಜಿತೆ., ಕಾರುಣ್ಯ ಸಿಂಧು., ಜ್ಞಾನ ಜ್ಯೋತಿ., ಲಾಸ್ಯ., ಬೇಗನೆ ಬಾರೋ., ಆತ್ಮ ಶೋಧನೆ., ಕೃಪಾ ಕಟಾಕ್ಷ., ಮಾಣಿಕ್ಯ., ಮತದಾನ., ಕುರ್ಚಿಯ ಗತ್ತು., ಯುಗಳ ಗಾನ., ಚಂಡಾಟ., ತಂದೆಯೇ ದೇವರು., ನಭದೊಳಿಹ ನೀಲಕಂಠ., ಶಾಪ., ರಕ್ಷಣೆ.ಹೂಬನ., ತವರು., ವಂದನೆ., ಜೀವಾಧಾರ., ಒಡಲಾಳ., ದುಡಿಮೆಯ ಫಲ., ಅಸಮಾನ., ಸುಮಬಾಲೆ., ಕೃಷಿಯ ಖುಷಿ., ಮುದ್ದು ತಾರೋ., ಬೆಳಕಿನ ಬೆರಗು., ಮುಗಿಲ ಹನಿಗಳು., ಗೆಳೆತನ., ಆರಾಧನೆ., ದಿವ್ಯ ಪ್ರಭೆ., ಜಳಕದ ಪುಳಕ. ಕಲ್ಪನೆ., ಬಾಳದೀವಿಗೆ., ಹಸಿರು., ಭಾವಲೀಲೆ., ತನ್ನಿರೆ ಹಾಲ., ಪಚ್ಚೆಯ ತೆನೆ., ಹಂಬಲ., ಮೂಲಾಧಾರ., ಮುರಳಿ ಗಾನ., ಗಣಪ ಬಂದನಮ್ಮ., ಕೈ ಚಳಕ., ಕಾಯಕವೇ ಕೈಲಾಸ., ದೇಶದ ಪ್ರಗತಿ., ಹೆಮ್ಮೆಯ ಹಂಪಿ., ವಾಗಭಿಮಾನಿ, ಸಂದೇಶ., ಶಿವ ಸನ್ನಿಧಿ., ಕಾಯಕ ನಿಷ್ಠೆ. ಹೀಗೆ ಇವರ ಸಾಹಿತ್ಯ ಸಾಲುಗಳು ಸಾಗಿ 55 ನೇ ಕವನ
ಕಾಯಕ ನಿಷ್ಠೆ
ಕಾಯಕ ನಿಷ್ಠೆಯ ಯೋಗಿಗೆ,
ಗೌರವಿಸುವುದೇ ಕಾಣಿಕೆ,
ಅನ್ನದಾತ ಸುಖೀ ಭವ,
ಸಂತೃಪ್ತಿಯಲಿ ಹಾಡಿ ಹೊಗಳುವ.
ಕವನಕ್ಕೆ ಈ ಸಂಕಲನ ಮುಕ್ತಶಯವಾಗುತ್ತದೆ ಒಂದಕ್ಕಿ0ತ ಒಂದು ವಿಭಿನ್ನವಾದ ಕವನಗಳನ್ನು ರಚಿಸಿದ್ದಾರೆ ಜಯಂತಿ ಕನ್ನುಕೆರೆ ಅವರು ಇವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರಲಿ ಎಂದು ಆಶಿಸುತ್ತ ಶುಭವಾಗಲಿ.
Comments (0)
Post Comment
Report Abuse
Be the first to comment using the form below.